Wednesday, August 19, 2009

ಸವಾರಿ


ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ... ಒಲವೂ..
ಸಿಹಿ ಸವಿ ಕವನಾ...
ಬರಲಿ ಮಳೆಯಾಗಿ
ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ.. ಹಲವೂ...
ಹಸಿ ಖುಷಿ ಕವನಾ...
ಕನಸ ನೀ ನನಸಾಗಿಸಿ.. ಕಲರವ ನೀ ಪಸರಿಸಿ
ನೀ ಇನಿಯ ನೀ ಪ್ರೀತಿಗೆ ಸಾರಥಿ..

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು .. ಒಲವೂ.......
ಸಿಹಿ ಸವಿ ಕವನಾ..

ರಿಂಗಣ ಹೊಸತನ ತರುವ ಈ ನರ್ತನ
ತಿಂಗಳ ಬೆಳಕನ ಕಂಡೆ ಈ ಸಂಜೆ ನಾ
ಧರೆಗಿಳಿದ ಕಿನ್ನರ ನೀ
ವಿಸ್ಮಯದಾ ಕಿರಣವೇ ನೀ
ನನ್ನ ಕನಸುಗಳು ತೇಲಾಡಿ ಕುಣಿಯುತಿವೆ
ನೀ ಇನಿಯ ನೀ ಪ್ರೀತಿಗೆ ಸಾರಥಿ...

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವೂ ..
ಸಿಹಿ ಸವಿ ಕವನಾ...

ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ
ಆಗಸಕೆ ರಂಗೆರಚಿ ಬಣ್ಣದಲಿ ಭಾವ ಜಿನುಕಿ
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯ ನೀ ಪ್ರೀತಿಗೆ ಸಾರಥಿ ...

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವೂ..
ಸಿಹಿ ಸವಿ ಕವನಾ....

1 comment: